ಭಾರತದಲ್ಲಿ ಕ್ರಾಂತಿ ಮತ್ತು ಮಾವೋವಾದಿ
ಚಳುವಳಿ
ಚಾರು ಪ್ರಕಾಶನದಿಂದ ಪ್ರಕಟಿತ ಭಾರತದಲ್ಲಿ ಕ್ರಾಂತಿ
ಮತ್ತು
ಮಾವೋವಾದಿ
ಚಳುವಳಿ
ಈ ಪುಸ್ತಕ ಜನಸಾಮಾನ್ಯರೆಲ್ಲರಿಗೂ ಅರ್ಥವಾಗುವ ರೀತಿಯಲ್ಲಿ ಮಾರ್ಕ್ಸ್ವಾದ, ಲೇನಿನವಾದ ಮಾವೋವಾದದ ಸಾರವನ್ನು ಅದರ ಸೈದ್ದಾಂತಿಕ ಪರಿಕಲ್ಪನೆಯನ್ನು ಒಳಗೊಂಡಿರುವುದು. ಭಾರತದಲ್ಲಿ ಮಾರ್ಕ್ಸ್ವಾದಿ ಚಳುವಳಿ ಅದು ನಡೆದು ಬಂದ ದಾರಿ, ಭಾರತದ ಮಾರ್ಕ್ಸ್ವಾದಿ ಚಳುವಳಿಯಲ್ಲಿ ರಾಜಕೀಯ ನಡೆಗಳು, ಚಳುವಳಿಯ ಏಳು ಬೀಳು, ಮಾವೋವಾದಿ ಪಕ್ಷದ ಹುಟ್ಟು ಕಾರ್ಯನಿರ್ವಹಣೆ ಬೆಳವಣಿಗೆ. ಕ್ರಾಂತಿಕಾರಿ ಚಳುವಳಿಯಲ್ಲಿ ವಿವಿಧ ರಾಜಕೀಯ ಪಕ್ಷ, ನೇತಾರರ ಹಸ್ತಕ್ಷೇಪ, ನಿರ್ದಾರ ಈ ಎಲ್ಲವೂ ಪುಸ್ತಕದಲ್ಲಿ ಮನಮುಟ್ಟುವಂತೆ ಮೂಡಿಬಂದಿದೆ.
ತೆಲಂಗಾಣ ರೈತ ಹೋರಾಟ, ನಕ್ಸಲ್ಬರಿ ಚಳುವಳಿ,
ದೇಶದ ವಿವಿಧ ಭಾಗಗಳಲ್ಲಿ ನಡೆದ ಕ್ರಾಂತಿಕಾರಿ ಹೋರಾಟ, ಹೋರಾಟದ ದಮನಕ್ಕೆ ನಮ್ಮ ಆಳುವ ಪ್ರಭುತ್ವ ಕೈಗೊಂಡ ಕ್ರಮಗಳು, ರೈತ ಹೋರಾಟದಲ್ಲಿ ವಿದ್ಯಾxðಗಳ ಭಾಗವಹಿಸುವಿಕೆ, ಆದಿವಾಸಿ ಜನಾಂಗಗಳ ಮೇಲೆ ನಿರಂತರವಾಗಿ ಆಗುತ್ತಿರುವ ಅನ್ಯಾಯ ಅವರ ಹೋರಾಟ,
ದೇಶ ರಾಜ್ಯದಲ್ಲಿ ನಕ್ಸಲ್ಬರಿ ಚಳುವಳಿ ಹುಟ್ಟಿ ಬೆಳೆದು ಬಂದ ರೀತಿ, ಚಳುವಳಿಯ ಏಳು ಬೀಳುಗಳನ್ನು, ಚಳುವಳಿಯ ದೌರ್ಬಲ್ಯಗಳೆನಿತ್ತು ಎಂಬುದನ್ನು ವಿಮ±Áðತ್ಮಕವಾಗಿ ಲೇಖಕರು ವಿವರಿಸಿರುವರು.
ಕ್ರಾಂತಿಯ ಕುರಿತು, ಮಾರ್ಕ್ಸ್ವಾದದ ಕುರಿತು, ಮಾವೋವಾದಿ ಚಳುವಳಿಯ ಕುರಿತು ಜನರಲ್ಲಿ ವಿವಿಧ ಕಾರಣಗಳಿಂದ
ಇರುವ ತಪ್ಪು ಅಭಿಪ್ರಾಯವನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಪುಸ್ತಕ ಪರಿಣಾಮಕಾರಿಯಾಗಿರುವುದರಲ್ಲಿ ಸಂದೇಹವಿಲ್ಲ. ತಮ್ಮ 25 ವರ್ಷದ ಅನುಭವದಿಂದ
ಲೇಖಕ ಶ್ರೀಧರ (ನೂರ್ ಜುಲ್ಛೀಕರ) ಮುಂದೆ ಆಗಬೇಕಾಗಿರುದೇನು ? ಅದಕ್ಕಾಗಿ ಮಾಡಬೇಕಾಗಿರುವುದೇನು? ಎಂಬುದರ ಬಗ್ಗೆ ವಾಸ್ತವಿಕ ನೆಲೆಯಲ್ಲಿ ವಿಶ್ಲೇಷಿಸಿ ಬದಲಾವಣೆ ಬಯಸುವ ಎಲ್ಲರಿಗೂ ಮುಂದೆ ಸಾಗಬೇಕಾಗಿರುವ ದಾರಿಯ ಬಗ್ಗೆ ತಿಳಿಸಿರುವುದು ಗಮನಾರ್ಹವಾಗಿರುವುದು.
ಮುಕ್ತ ಮನಸ್ಸಿನಿಂದ ಪುಸ್ತಕವನ್ನು ಓದುತ್ತಿರುವಾಗ ಕೆಲವೊಮ್ಮೆ ಮೈ ಕೂದಲು ನಿಮಿರುವುದು, ಕಣ್ಣಂಜಿನಲ್ಲಿ ನೀರು ಬಂದರೆ ಅದೇ ಲೇಖಕರ ಭಾವನೆಗೆ ಮತ್ತು ಶೋಷಿತ ವರ್ಗಕ್ಕೆ ಸ್ಪಂದಿಸುವ ಕನಿಷ್ಟ ಸೌಜನ್ಯವಾಗಿರುವುದು.
ಒಟ್ಟಾರೆ ಸಾಮಾಜಿಕ ಬದಲಾವಣೆಯ ತುಡಿತದಲ್ಲಿರುವ ಎಲ್ಲರೂ ಪುಸ್ತಕವನ್ನು ಓದಲು ಮಾತ್ರ ಮರೆಯಬೇಡಿ.
ವಿವೇಕ ಬೆಟ್ಕುಳಿ