ಗುರುವಾರ, ಸೆಪ್ಟೆಂಬರ್ 27, 2012

ಕನ್ನಡ ಭಾಷೆ ಬೆಳವಣಿಗೆ



 ಕನ್ನಡ ಭಾಷೆ ಬೆಳವಣಿಗೆ ನಾವು ಸಾಗುತ್ತಿರುವ ದಿಕ್ಕು ಸರಿ ಇದೆಯೇ,,,,,?
(ಕನಾಟಕದಲ್ಲಿ ಕನ್ನಡ ಉಳಿಸುವ ಬಗ್ಗೆ ಬೆಳೆಸುವ ಬಗ್ಗೆ ಚಚರ್ೆ ಆಂದೋಲನ ಹೋರಾಟ ನಡೆಯುತ್ತಲೇ ಇದೆ.  ನಮ್ಮ ಭಾಷಾ ಹೋರಾಟ ಮತ್ತು ನಾವು ಸಾಗುತ್ತಿರುವ ದಾರಿಯ ಬಗ್ಗೆ ಒಂದು ಪ್ರಾರಂಭದ ಚಚರ್ೆ ಮಾತ್ರ ಇದಾಗಿದೆ)
ದಿನೇ ದಿನೇ ಕನ್ನಡ ಹೋರಾಟಗಾರರ ಸಂಖ್ಯೆ, ಕನ್ನಡದ ಉಳಿವಿನ ಬಗ್ಗೆ ಮಾತನಾಡುವವರ ಸಂಖ್ಯೆ ರಾಜಕೀಯ ಪಕ್ಷದವರ ಕನ್ನಡ ಹೇಳಿಕೆಗಳ ಸಂಖ್ಯೆ ಹನುಮಂತನ ಬಾಲದ ಹಾಗೆ ಪ್ರಚಾರಗೊಳ್ಳುತ್ತಾ ಬೆಳೆಯುತ್ತಾ ಇದೆ. ಆದರೇ ಅದಕ್ಕಿಂತ ವೇಗವಾಗಿ ಇಂಗ್ಲೀಷ ಶಾಲೆಗಳ ಸಂಖ್ಯೆ ಅದಕ್ಕೆ ಮಕ್ಕಳನ್ನು ಕಳುಹಿಸುವ ಗುಂಪಿನ ಸಂಖ್ಯೆ ಗೌಪ್ಯವಾಗಿ  ಹೆಚ್ಚಾಗುತ್ತಿದೆ.  ಈ ರೀತಿಯಲ್ಲಿ ದ್ವಂದದಲ್ಲಿ ಸಾಗುತ್ತಿರುವ ನಮ್ಮ ಕನರ್ಾಟಕ ರಾಜ್ಯ ಪುನ: ಕನ್ನಡ ರಾಜ್ಯೋತ್ಸವವನ್ನು ಆಚರಿಸುತ್ತಿರುವೆವು. ಈ ಸಂದರ್ಭದಲ್ಲಿಯಾದರೂ ಕನ್ನಡದ ಉಳಿವಿನ ಬಗ್ಗೆ ವ್ಯವಸ್ಥೆಯ ನೆಲೆಯಲ್ಲಿ ಚಿಂತಿಸಬೇಕಾದ ಅಗತ್ಯತೆ ಕಾಣುವುದು.
ವಾಹನಕ್ಕೆ ಕುತ್ತಿಗೆಗೆ ಕನ್ನಡದ ಬಾವುಟವನ್ನು ಹಾಕಿ ಓಡಾಡುವುದರಿಂದ, ತಮಿಳು, ಮರಾಠಿ ಜನರಿಗೆ ಹೊಡೆಯುವುದರಿಂದ, ಇಂಗೀಷ ನಾಮಫಲಕ ತೆಗೆಯುವುದರಿಂದ, ಪ್ರತಿಮೆ ಅನಾವರಣ ಮಾಡುವುದನ್ನು ನಿಲ್ಲಿಸುವುದರಿಂದ, ಬೇರೆ ಭಾಷೆಯ ಚಲನಚಿತ್ರ ಟಿ.ವಿ ಚಾನೆಲ್ ಗಳನ್ನು ನಿರ್ಭಂದಿಸುವುದರಿಂದ ಕನ್ನಡ ಬೆಳವಣಿಗೆ ಆಗುತ್ತದೆ ಎಂಬುದು ಕನಸು. ಈ ಎಲ್ಲ ವಿಧಾನಗಳು ಒಂದು ಸಾರಿ ಕನ್ನಡಿಗರನ್ನು ಭಾವನಾತ್ಮಕವಾಗಿ ಪ್ರತಿಕ್ರಿಯಿಸುವಂತೆ ಮಾಡಬಹುದು. ಇವೆಲ್ಲವು ದ್ವೇಷವನ್ನು ಬೆಳೆಸುವಂತಹಾ ವಿಧಾನಗಳೆ ವಿನಹಾ; ಭಾಷೆಯ ಬೆಳವಣಿಗೆಗೆ ಪೂರಕವಾಗಿಲ್ಲ.
ಕೇವಲ ದೊಡ್ಡ ದೊಡ್ಡ ಸಾಹಿತಿಗಳ ಪುಸ್ತಕವನ್ನು ಪ್ರಕಟಿಸುವುದರಿಂದ, ಅನ್ಯ ಭಾಷೆಯ ಶಾಲೆಗಳಿಗೆ ಅನುಮತಿ ನೀಡದಿರುವುದರಿಂದ, ಅಂತಹ ಶಾಲೆಗಳ ಮೇಲೆ ದಂಡ ಹಾಕುವುದರಿಂದ, ಕನ್ನಡದ ಉಳಿವಿಗಾಗಿ ಎಂದು ಕೋಟರ್್ನಲ್ಲಿ ದಾವೆ ಹೂಡುವುದರಿಂದ, ರಾಜಕೀಯ ಪಕ್ಷದವರ ಪ್ರಣಾಳಿಕೆಯಿಂದ ಯಾವುದೇ ಕಾರಣಕ್ಕೂ ಕನ್ನಡ ಬೆಳವಣಿಗೆ ಅಸಾಧ್ಯ ಈ ಎಲ್ಲವೂ ಸಹಾ ಯಾರನ್ನೋ ಮೆಚ್ಚಿಸುವುದಕ್ಕಾಗಿ ಅಥವಾ ತಾವು ಕನ್ನಡ ಪರ ತೋರಿಸಿಕೊಳ್ಳುವ ವಿಧಾನವಾಗಿರುವುದು. ಸೂಕ್ಷ್ಮವಾಗಿ ಗಮನಿಸಿದರೆ ಕನ್ನಡ ಹೋರಾಟದಲ್ಲಿರುವ ಕನ್ನಡಾಭಿಮಾನಿಗಳು, ರಾಜಕೀಯ ಪುಡಾರಿಗಳು, ಸಕರ್ಾರಿ ನೌಕರರು ಇವರುಗಳ ಮಕ್ಕಳಿಂದಲ್ಲೇ ಇಂದು ಹೆಚ್ಚು ಇಂಗ್ಲೀಷ ಶಾಲೆಗಳು ನಡೆಯುತ್ತಿರುವುದು ಎಂಬುದನ್ನು ಗಮನಿಸಬೇಕಾಗಿದೆ.
ಸಕರ್ಾರ ಪ್ರತಿ ಗ್ರಾಮ ಪಂಚಾಯಿತಿಗೆ ಗ್ರಂಥಾಲಯದ ಸೌಲಭ್ಯ ಓದಗಿಸಿದೆ. ಅಲ್ಲಿ ಸಾಕಷ್ಟು ಪುಸ್ತಕಗಳು ಇವೆ ಆದರೇ ಹೆಚ್ಚಿನ ಕಡೆ ಇನ್ನೂ ಕೆಲವೊಂದು ಪುಸ್ತಕಗಳನ್ನು ಒಬ್ಬರೂ ತೆಗೆದುಕೊಂಡ ಹೋಗಿರುವ ಉದಾಹರಣೆ ಇಲ್ಲ. ಕೇವಲ ದಿನ ಪತ್ರಿಕೆ ವಾರಪತ್ರಿಕೆಯ ಪ್ರಯೋಜನವನ್ನು ಗ್ರಂಥಾಲಯದಿಂದ ಪಡೆದುಕೊಳ್ಳುತ್ತಿರುವರು.  ಇದಕ್ಕೆ ಕಾರಣ ಏನೆಂದು ಹುಡುಕುವ ಬದಲು ನಾವು ಇನ್ನೂ ಪುಸ್ತಕವನ್ನು ಒದಗಿಸುವ, ಆಂದೋಲನ ಮಾಡುವ ಬಗ್ಗೆ ಮಾತನಾಡುತ್ತಿರುವೆವು.
ಒಂದು ಭಾಷೆಯ ಬೆಳವಣಿಗೆ ಆಗಬೇಕಾದರೆ ಅದು ಮಕ್ಕಳ ಪ್ರಾಥಮಿಕ ಹಂತದಿಂದಲೆ ಪ್ರಾರಂಭವಾಗಬೇಕು. ಮಾತನಾಡು, ಓದುವ, ಬರೆಯುವ ಬಗ್ಗೆ ಆಸಕ್ತಿ ಬರಬೇಕು. ಆದರೇ ನಮ್ಮ ಶಿಕ್ಷಣ ವ್ಯವಸ್ಥೆ ಸಂಪೂರ್ಣವಾಗಿ ಅಂಕದ ಮೇಲೆ ಅವಲಂಬಿತವಾಗಿದೆ ಯಾರಿಗೂ ಭಾಷೆಯ ಬಗ್ಗೆ ಗಮನವಿಲ್ಲ ಬದಲಾಗಿ ಹೆಚ್ಚು ಅಂಕ ಪಡೆಯಬೇಕು ಬೇರೆ ಬೇರೆ ಕೋರ್ಸನಲ್ಲಿ ಅವಕಾಶ ಗಿಟ್ಟಿಸಬೇಕು ಎಂಬುದೊಂದೆ ಚಿಂತೆಯಾಗಿದೆ. ಪರೀಕ್ಷೆ ಮೇಲೆ ಸಂಪೂರ್ಣ ಶಿಕ್ಷಣ ಅವಲಂಬಿತವಾಗಿದೆ. ಅದಕ್ಕೆ ಪೂರಕವಾಗಿ ಇಲ್ಲಿಯವರೆಗೂ ಎಲ್ಲರೂ ಅವರವರ ತರಗತಿ ಪುಸ್ತಕ ಓದುವುದಕ್ಕಾಗಿ ಮಾತ್ರ ಶ್ರಮ ಪಡುತ್ತಿರುವರು ಅದೂ ಆಸಕ್ತಿಯಿಂದ ಅಲ್ಲ ಬದಲಾಗಿ ಒತ್ತಡದಿಂದ ಆಗಿದೆ. ಅದೇ ರೀತಿ ಶಿಕ್ಷಕರು ಅದನ್ನೇ ಕಂಠ ಪಾಠ ಮಾಡಿಸುವರು ಹೆಚ್ಚು ಅಂಕ ಪಡೆದು ಪಾಸಾದರೆ ಶಾಲೆಯ ಮತ್ತು ಆಯಾ ಶಿಕ್ಷಕರ ಗೌರವ ಸಹಾ ಹೆಚ್ಚಾಗುವುದು.  ನಮ್ಮ ಸಕರ್ಾರ ಸಹಾ ಇದನ್ನೇ ಪೋಷಿಸುತ್ತಿರುವುದು ದುರಾದೃಷ್ಠಕರವಾಗಿದೆ. ಕಲಿಯಲ್ಲಿ ಹಿಂದುಳಿದ ಮಕ್ಕಳು ಅವರಿಗೆ ಪರಿಹಾರ ಬೋಧನೆ ಎಂಬ ಯೋಜನೆ, ಮಕ್ಕಳ ಕಲಿಕೆಯ ಮಟ್ಟವನ್ನು ತಿಳಿಯಲು ಮೌಲ್ಯಾಂಕನ ಸಂಸ್ಥೆ ಈ ರೀತಿಯ ಯೋಜನೆಗಳನ್ನು ಮಾಡುತ್ತಾ ಇದೆ. ಆದರೇ ಶಿಕ್ಷಣದ ಬಗ್ಗೆ ಹೇಳುವಾಗ ಶಿಕ್ಷಣ ಮುಂದಿನ ಜೀವನಕ್ಕೆ ಪೂರಕವಾಗಿರಬೇಕು ಎಂದು ಹೇಳುತ್ತೇವೆ. ಅದಕ್ಕೆ ಪೂರಕವಾದ ವ್ಯವಸ್ಥೆ ಇಲ್ಲವಾಗಿದೆ. ಕನ್ನಡ ಬೆಳವಣಿಗೆ ಕುಂಠಿತವಾಗಲು ನಮ್ಮ ಪ್ರಾಥಮಿಕ ಶಾಲೆಯ ಕಲಿಕಾ ಪದ್ದತಿಯೂ ಓಂದು ಕಾರಣವಾಗಿದೆ.  ಓದುವ ಹವ್ಯಾಸವನ್ನು ಬೆಳೆಸಲು, ಬೇರೆ ಬೇರೆ ಮಾಹಿತಿಯನ್ನು ಹುಡುಕುವ, ಹೊಸದಾಗಿ ಏನಾದರೂ ಸೃಷ್ಠಿ ಮಾಡುವ ಸಾಮಥ್ರ್ಯವನ್ನು ಬೆಳಸುವಲ್ಲಿ ನಾವು ವಿಫಲರಾಗುತ್ತಿರುವೆವು. ಈ ಬಗ್ಗೆ ಗಂಭೀರವಾಗಿ ಚಿಂತಿಸಬೇಕಾಗಿದೆ.
ಸಿನಿಮಾ ಕನ್ನಡ ಆದರೂ ಅದರ ಹಾಡು, ಸಂಭಾಷಣೆಯಲ್ಲಿ  ಶಬ್ದಗಳು ಅನೇಕ ಬೇರೆ ಭಾಷೆಯೇ ಇರುವುದು. ಸಾವಿರಾರು ವರ್ಷದ ಇತಿಹಾಸ ಇರುವ ನಮ್ಮ ಕನ್ನಡ ಭಾಷೆಗೆ ಶಬ್ದ ದಾರಿದ್ರ್ಯವೆ? ಅಥವಾ ಭಾಷೆಯಲ್ಲಿ ಹೊಸ ಹೊಸದನ್ನು ಹುಡುಕುವ ಸಾಮಥ್ರ್ಯವೇ ನಮಗೆ ಇಲ್ಲವೇ? ಇಂತಹ ವಿಚಾರಗಳ ಚಿಂತನೆ ಈ ಕಾಲಘಟ್ಟದಲ್ಲಿ ಸೂಕ್ತವೆಂದು ಅನಿಸುವುದು.
ದಿನೇ ದಿನೇ ಹೊಸ ಹೊಸ ಪತ್ರಿಕೆಗಳು ಬರುತ್ತಿವೆ. ಆದರೇ ಅದು ನಿರಂತರವಾಗಿ ಮುನ್ನಡೆಯುತ್ತಿಲ್ಲ. ಆಥರ್ಿಕ ನಷ್ಟದಿಂದ ಮುಚ್ಚಲ್ಪಡುತ್ತಿವೆ. ದೊಡ್ಡ ದೊಡ್ಡ ಪತ್ರಿಕೆಗಳ ದರ ಸಮರದಲ್ಲಿ ಜಿಲ್ಲಾ ತಾಲ್ಲೂಕಾ ಮಟ್ಟದ ಪತ್ರಿಕೆಗಳು ನೆಲೆ ನಿಲ್ಲಲು ಹೆಣಗಾಡುತ್ತಿದೆ. ಸಕರ್ಾರದ ಸಹಕಾರ ಸಹಾ ಹೆಚ್ಚು ರಾಜ್ಯ ಹಂತದ ಪತ್ರಿಕೆಗೆ ಇರುವುದು.  ಕೇವಲ ಆಥರ್ಿಕ ದೃಷ್ಠಿಯಿಂದ ಮಾತ್ರ ನೋಡದೇ ಒಂದೊಂದು ವಿಚಾರವನ್ನು ಕಟ್ಟುವ ಹಿನ್ನಲೆಯಲ್ಲಿ ಪತ್ರಿಕೆಗಳು ಕಾರ್ಯನಿರ್ವಹಿಸಬೇಕಾಗಿದೆ. ಅದಕ್ಕೆ ಪೂರಕವಾದ ವಾತಾವರಣವನ್ನು ಒದಗಿಸಬೇಕು. ಅಂದಾಗ ಬೇರೆ ಬೇರೆ ವಿಚಾರಗಳ ಬಗ್ಗೆ ಎಲ್ಲರೂ ಚಿಂತಿಸಲು ಸಾಧ್ಯವಾಗುವುದು. ಇದರಲ್ಲಿ ಭಾಷೆಯ ಬೆಳವಣೆಗೆ ಸಹಾ ಒಂದಾಗಿದೆ.
ಇಂದು ಕನರ್ಾಟಕ ರಾಜ್ಯೋತ್ಸವ ದುಂದುವೆಚ್ಚಮಾಡಿ ಕಾರ್ಯಕ್ರಮ ಮಾಡುವುದಕ್ಕಿಂತ ಹಳ್ಳಿಯ  ಶಾಲೆಗಳಿಗೆ ಚಿಕ್ಕ ಚಿಕ್ಕ ವಿಭಿನ್ನ ಬಗೆಯ ಪುಸ್ತಕವನ್ನು ಒದಗಿಸುವುದು. ಮತ್ತು ಮಕ್ಕಳು ಯಾವುದೇ ಒತ್ತಡ, ಪರೀಕ್ಷೆ ಇಲ್ಲದೇ ಸ್ವತಂತ್ರವಾಗಿ ಕಲಿಯುವ ಅವಕಾಶವನ್ನು ಒದಗಿಸುವ ಕಲಿಕಾ ಪದ್ದತಿ ಬಗ್ಗೆ ಚಿಂತಿಸುವ ಕಾರ್ಯ ಪ್ರಾರಂಭವಾಗಲಿ. ಆ ಮೂಲಕ ಕನ್ನಡ ಭಾಷೆ ಬೆಳವಣಿಗೆಗೆ ಹೊಸ ರೂಪವನ್ನು ಕೊಡುವ ಪ್ರಯತ್ನ ಆಗಲಿ.
                                                         ಜೈ ಕನರ್ಾಟಕ.
                                                           ವಿವೇಕ.
                                            









1 ಕಾಮೆಂಟ್‌:

ಸಮಾನತೆಯ ಹೆಸರಿನಲ್ಲಿ ಮಹಿಳೆ ಪುರುಷನಾಗುವುದು ಸೂಕ್ತವೇ?

  ಸ್ವಾತಂತ್ರ್ಯ ಸಿಕ್ಕು 75 ವರ್ಷ ಕಳೆದರೂ ಮಹಿಳೆ ಸಮಾನತೆ ಎಂಬುದು ಬಂದಿಲ್ಲ . ಇಂದಿಗೂ ದೇಶದಲ್ಲಿ ಅರ್ಧದಷ್ಟು ಜನಸಂಖ್ಯೆ ಇದ್ದರೂ ಮಹಿಳಾ ಜನಪ್ರತಿನಿಧಿಗಳ...