ಸ್ವಚ್ಛ ಭಾರತಕ್ಕಾಗಿ ನಮ್ಮ ಶಾಲೆಯಲ್ಲಿಯೂ ಊರವರು,
ಶಿಕ್ಷಕರು,
ಗ್ರಾಮ ಪಂಚಾಯಿತಿಯವರು
ಎಲ್ಲರೂ ಊರಿನಲ್ಲಿ ಜ್ರಾಗತಿ ಮೂಡಿಸುವ ಕಾರ್ಯಕ್ರಮ ಮಾಡಿರುವೆವು. ಆದರೇ ಭೃಷ್ಠ ಜನಪ್ರತಿನಿಧಿಗಳಿಗೆ, ಜವಬ್ದಾರಿ ಇಲ್ಲದೆ
ಸಂಬಳಕ್ಕಾಗಿ ಕಾರ್ಯ ಮಾಡುವ ಶಿಕ್ಷಕರಿಗೆ ಹಳ್ಳಿಯ ಶಾಲೆಯಲ್ಲಿನ ಸ್ವಚ್ಛತೆ ಬಗ್ಗೆ ಗಮನ
ನೀಡುವಷ್ಟು ವೇಳೆಯೂ ಇಲ್ಲ. ನಮ್ಮ ಊರಿನವರಿಗೆ ಸಕಾ೯ರಿ ವ್ಯವಸ್ಥೆಯ ಬಗ್ಗೆ ಜಿಗುಪ್ಸೆ, ತಾತ್ಸಾರ ಬಂದಿರುವುದು.
ಪರಿಣಾಮವಾಗಿ ವರ್ಷದಿಂದ ವರ್ಷಕ್ಕೆ ಸಕಾ೯ರಿ ಶಾಲೆಯಲ್ಲಿ ಮಕ್ಕಳ
ಸಂಖ್ಯೆ ಇಳಿಮುಖವಾಗಿರುವದು........ಇದಕ್ಕೆ ಪರಿಹಾರ ಇದೆಯಾ.....???????????
ಬುಧವಾರ, ಫೆಬ್ರವರಿ 1, 2017
ಮಂಗಳವಾರ, ಜನವರಿ 31, 2017
ದೇಶಭಕ್ತಿ ಮತ್ತು ಮಾಧ್ಯಮಗಳು
ದೇಶಭಕ್ತಿ ಮತ್ತು ಮಾಧ್ಯಮಗಳು
ಸಜಿ೯ಕಲ್ ದಾಳಿ ಮಾಡಿ ಮತ್ತು ದೇಶದ ರಕ್ಷಣಾ
ವೆಚ್ಚವನ್ನು ಹೆಚ್ಚಿಸುವುದರ ಮೂಲಕ ದೇಶವನ್ನು ಬಲಿಷ್ಠಗೊಳಿಸಿರುವೆವು, ಇದು ನಮ್ಮ ನಮ್ಮ ದೇಶದ
ಹೆಮ್ಮೆ ಎಂದು ಸಂಭ್ರಮಿಸುವ ದೇಶಭಕ್ತರು ಒಂದು ಕಡೆ, ಸ್ವಾತಂತ್ಯ ಬಂದಾಗಿನಿಂದ ದೇಶದ ರಕ್ಷಣೆಯನ್ನು ಮಾಡುತ್ತಾ, ಅಗತ್ಯವಾದಾಗ ಯುದ್ದವನ್ನು
ಮಾಡಿ ದೇಶವನ್ನು ರಕ್ಷಣೆ ಮಾಡುತ್ತಾ ಗಡಿಯನ್ನು ನಿಮಿ೯ಸಿದವರು ನಾವು ಮೂಲ
ದೇಶಭಕ್ತರು ಎಂದು ಹೇಳುವವರು ಇನ್ನೊಂದು ಕಡೆ, ನೈಜವಾಗಿ ದೇಶದ ಗಡಿಯಲ್ಲಿ ಗಡಿ ಕಾಯುತ್ತಾ ಮೇಲಾಧಿಕಾರಿಗಳ ಆದೇಶ
ಪಾಲಿಸುವ ಸೈನಿಕರು, ತಮಗಿರುವ ಸಂಕಷ್ಟವನ್ನು ಹೇಳಿಕೊಳ್ಳುವ ಸೈನಿಕರು ಈ ಎಲ್ಲವುಗಳ ಮಧ್ಯದಲ್ಲಿ
ದೇಶದಲ್ಲಿ ತಮ್ಮ ತಮ್ಮ ವಿಚಾರಗಳ ಬಗ್ಗೆ ಮಾಧ್ಯಮ, ಸಾರ್ವಜನಿಕ ಸಭೆಗಳ ಬಗ್ಗೆ ವಾದ ವಿವಾದ ಮಾಡುವ ಬುದ್ದಿಜೀವಿಗಳು
ಇನ್ನೊಂದು ಕಡೆ,
ಒಟ್ಟಾರೆ ದೇಶದ ಗಡಿ ರಕ್ಷಣೆ
ಚಚೆ೯ಯ ವಿಷಯವಾಗಿರುವುದು. ಇದರ
ಮುಂದುವರೆದೆ ಭಾಗವಾಗಿ ಹೊಟ್ಟೆ ತುಂಬಾ ತಿಂದು ಊಂಡು, ಸಕಾ೯ರಿ ಅಥವಾ ಖಾಸಗಿ
ಕ್ಷೇತ್ರದಲ್ಲಿ ಅಗತ್ಯವಾದ ಸಂಬಳ ಪಡೆಯುತ್ತಿರುವವರು, ಉತ್ತಮವಾದ ವ್ಯವಹಾರ ಮಾಡುತ್ತಾ ಹಣ ಸಂಪಾದನೆ ಮಾಡುತ್ತಿರುವ
ಚಿಕ್ಕ ದೊಡ್ಡ ವ್ಯಾಪಾರಸ್ತರು, ಅತ್ಯುತ್ತಮವಾದ ಕೃಷಿ ಭೂಮಿಯನ್ನು ಹೊಂದಿ (ಕೆಲಸಕ್ಕೆ ಕಾಮಿ೯ಕರನ್ನು ಇರಿಸಿಕೊಂಡು) ಸಕಾ೯ರದ ಸೌಲಭ್ಯವನ್ನು ಪಡೆದು
ಸುಖದ ಜೀವನವನ್ನು ಸಾಗಿಸುತ್ತಿರುವ ಪ್ರಗತಿಪರರೆಂಬ ಹಣೆಪಟ್ಟಿ ಪಡೆದ ರೈತರುಗಳು ಇವರುಗಳೆಲ್ಲಾ
ಇಂದು ಗಡಿಯ ಬಗ್ಗೆ, ಸೈನಿಕರ ಬಗ್ಗೆ,ದೇಶ ರಕ್ಷಣೆಯ ಚಚೆ೯ ಮಾಡುತ್ತಿರುವರು, ಸಂಭ್ರಮಿಸುತ್ತಿರುವರು
ಮುಖ್ಯವಾಗಿ ಸ್ಥಳೀಯ ನೆಲೆಯಲ್ಲಿ ಈ ವಿಷಯಗಳನ್ನು ಇರಿಸಿಕೊಂಡು ರಾಜಕೀಯವನ್ನು ಮಾಡುತ್ತಿರುವರು.
ನೈಜವಾಗಿ ದೇಶದ ಗಡಿಯಲ್ಲಿನ
ಸ್ಥಿತಿಯನ್ನು ಬಲ್ಲವರು ಯಾರು ಇಲ್ಲ. ಮಾಧ್ಯಮಗಳು, ಸಾಮಾಜಿಕ ಜಾಲತಾಣಗಳು, ರಾಜಕೀಯ ಪಕ್ಷಗಳ ಮುಖ್ಯಸ್ಥರು ಬೇರೆಯವರ ದೇಶಭಕ್ತಿಯ ಬಗ್ಗೆ
ಪ್ರಶ್ನೆ ಮಾಡುತ್ತಿರುವರು.
ಗಡಿಯಲ್ಲಿ ವಾಸ ಮಾಡುವ
ಸಾವಿರಾರು ಕುಟುಂಬಗಳು 10-15 ಕೀ.ಮೀ ದೂರದ ತಮ್ಮ ಸಂಭಂದಿಗಳನ್ನು ನೋಡಲು ಪಾಸಪೋರ್ಟ ವೀಸಾ ಎಂದು ಓಡಾಡುತ್ತಿರುವರು.
ಗಡಿಯಲ್ಲಿ ಇರುವ ಶಾಲೆಗಳಲ್ಲಿ ಅಗತ್ಯ ಮೂಲಭೂತ ಸೌಲಭ್ಯ, ಶಿಕ್ಷಕರ ಕೊರತೆ ಬೇರೆ, ಹಳ್ಳಿಗಳಲ್ಲಿ ಕುಡಿಯುವ ನೀರಿನ ಕೊರತೆ, ವ್ಯವಸ್ಥಿತವಾದ ಮನೆಗಳು ಇಲ್ಲ. ಈ ಎಲ್ಲಾ ವಿಚಾರಗಳು ನಮಗೆ ಬೇಕಾಗಿಯೂ ಇಲ್ಲ, ಅಗತ್ಯವು ಇಲ್ಲ. ನಾವಿರುವದು
ಗಡಿ ಪ್ರದೇಶದಲ್ಲಿ ಅಲ್ಲ. ನಮ್ಮದು ಸಮೂಹ ಸನ್ನಿ ದೇಶಭಕ್ತಿಯಾಗಿದೆ. ಮಾಧ್ಯಮ, ಸಾಮಾಜಿಕ ಮಾಧ್ಯಮಗಳು ನಮ್ಮ
ಇಂದಿನ ಮಾರ್ಗದರ್ಶಕರಾಗಿರುವರು. ನೈಜತೆಯನ್ನು ಕಳೆದುಕೊಂಡು, ಯಾವುದೋ ವ್ಯಕ್ತಿ, ಪಕ್ಷಗಳಿಗೆ ತಮ್ಮನ್ನು
ಮಾರಿಕೊಂಡ ಮಾಧ್ಯಮಗಳಿಗೆ ದಿಕ್ಕಾರವಿರಲಿ, ಇಂತಹ ವ್ಯವಸ್ಥೆಯನ್ನು ಬೆಳೆಸಿ ಪೋಷಿಸುತ್ತಿರುವ ನಮ್ಮ
ಶೈಕ್ಷಣಿಕ ಸಾಮಾಜಿಕ ವ್ಯವಸ್ಥೆಯನ್ನು ಮರು ಅವಲೋಕಿಸುವ ಅಗತ್ಯವಿದೆ.
ರಾಜಸ್ಥಾನ ಮತ್ತು ಗುಜರಾತಗೆ
ಹೊಂದಿಕೊಂಡಂತೆ ಪಾಕಿಸ್ತಾನದ ಮತ್ತು ಭಾರತದ ಗಡಿ ಪ್ರದೇಶದ ಕೆಲವೊಂದು ಚಿತ್ರಣ.
ಸೋಮವಾರ, ಜನವರಿ 30, 2017
ಗ್ರಾಮೀಣ ಕ್ರೀಡೆ......ನೆನಪಿದೆಯಾ..?
ಗ್ರಾಮೀಣ ಕ್ರೀಡೆ......ನೆನಪಿದೆಯಾ..?
ಗೋಣಿ ಚೀಲದಲ್ಲಿ
ಕಾಲುಗಳನ್ನು ಹಾಕಿ ಓಡುವುದು. ತುಂಬಾ ಕಡಿಮೆ ಖಚಿ೯ನಲ್ಲಿನ ಈ ಆಟ ಮಕ್ಕಳಿಗೆ ಸಂತೋಷವನ್ನು ನೀಡುವುದು. ಕೆಳಗೆ ಬೀಳದೆ
ನಿಗದಿತ ಗುರಿ ತಲುಪುವ ಈ ಆಟದಲ್ಲಿ ಯಾರು ಗೆದ್ದರು ಏನುವುದಕ್ಕಿಂತ ಪ್ರತಿಯೊಬ್ಬರು
ಭಾಗವಹಿಸುವುದು ಅಗತ್ಯವಾಗಿದೆಗೋಣಿ ಚೀಲದಲ್ಲಿ
ಕಾಲುಗಳನ್ನು ಹಾಕಿ ಓಡುವುದು. ತುಂಬಾ ಕಡಿಮೆ ಖಚಿ೯ನಲ್ಲಿನ ಈ ಆಟ ಮಕ್ಕಳಿಗೆ ಸಂತೋಷವನ್ನು ನೀಡುವುದು. ಕೆಳಗೆ ಬೀಳದೆ
ನಿಗದಿತ ಗುರಿ ತಲುಪುವ ಈ ಆಟದಲ್ಲಿ ಯಾರು ಗೆದ್ದರು ಏನುವುದಕ್ಕಿಂತ ಪ್ರತಿಯೊಬ್ಬರು
ಭಾಗವಹಿಸುವುದು ಅಗತ್ಯವಾಗಿದೆ
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)
ಸಮಾನತೆಯ ಹೆಸರಿನಲ್ಲಿ ಮಹಿಳೆ ಪುರುಷನಾಗುವುದು ಸೂಕ್ತವೇ?
ಸ್ವಾತಂತ್ರ್ಯ ಸಿಕ್ಕು 75 ವರ್ಷ ಕಳೆದರೂ ಮಹಿಳೆ ಸಮಾನತೆ ಎಂಬುದು ಬಂದಿಲ್ಲ . ಇಂದಿಗೂ ದೇಶದಲ್ಲಿ ಅರ್ಧದಷ್ಟು ಜನಸಂಖ್ಯೆ ಇದ್ದರೂ ಮಹಿಳಾ ಜನಪ್ರತಿನಿಧಿಗಳ...
-
“ಗುರಿ ತಪ್ಪಿದ ಕೆಲ ಗುರುಗಳಿಂದಾಗಿ ಸಮಾಜದ ನಂಬಿಕೆ ಕಳೆದುಕೊಳ್ಳುತ್ತಿರುವ ಗುರುವೃಂದ” ಪುನ : ಶಿಕ್ಷಕರನ್ನು ವರ್ಷದಲ್ಲಿ ಒಂದು ದಿನದ ಮಟ್ಟಿಗೆ ಹಾಡಿ ...
-
ಗಂಡಸರ ಮೇಲೆ ಲಾಕಡೌನ ಪರಿಣಾಮಗಳು ಕೊರೋನಾ ಕಾರಣದಿಂದಾಗಿ ದೇಶವೇ ಲಾಕಡೌನ ಆಗಿದೆ. ದೇಶದಲ್ಲಿ ಕಾಯ೯ ನಿವ೯ಹಿಸುವ ವಿವಿಧ ಕಾಯ೯ಕ್ಷೇತ್ರಗಳ ಮೇಲೆ ಗಂಭೀರ ಪರಿಣಾಮವನ್ನು ಬೀ...
-
ಮುಖ್ಯವಾಹಿನಿಗೆ ಬರಲು ಮಹಿಳೆಗೆ ಇರುವ ಅಡತಡೆಗಳೇನು ? ವಿಶ್ವ ಮಹಿಳಾ ದಿನಾಚರಣೆಯನ್ನು ನಾವೆಲ್ಲರೂ ಪ್ರತಿ ವರ್ಷ ಮಾರ್ಚ 8 ರಂದು ಆಚರಿಸುವೆವು . ಈ ಸ...