ಗುರುವಾರ, ಜನವರಿ 17, 2013

ಬಾಲ್ಯದ ನೆನಪು 2, ಮನೆಯ ಮೇಲೆ ಮರ ಬಿದ್ದು ನಾವೆಲ್ಲ ಬದುಕುಳಿದಾಗ.....



ಮನೆಯ ಮೇಲೆ ಮರ ಬಿದ್ದು ನಾವೆಲ್ಲ ಬದುಕುಳಿದಾಗ.......
ಶಿರಸಿ ತಾಲ್ಲೂಕು ಕಂಡ್ರಾಜಿ ಒಂದು ಪುಟ್ಟ ಗ್ರಾಮವಾಗಿತ್ತು. ನನ್ನ ಬಾಲ್ಯದ ಜೀವನ ಪೂ ಕಂಡ್ರಾಜಿಯಲ್ಲಿಯೇ ಕಳೆದಿರುವುದು. ಕಂಡ್ರಾಜಿಯ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನನ್ನ ಅಮ್ಮ ಶಿಕ್ಷಕಿ, ಅಪ್ಪ ಅಲ್ಲಿಂದ ಮೂರು ಕಿ.ಮೀ ದೂರವಿರುವ ಕೊರ್ಲಕಟ್ಟಾದಲ್ಲಿ ಶಿಕ್ಷಕರು. ದಿನಾಲು ಅಪ್ಪ, 5 ನೇ ತರಗತಿಯಲ್ಲಿ ಓದುತ್ತಿರುವ ನನ್ನ ಅಣ್ಣ, 7 ರಲ್ಲಿಇರುವ ನನ್ನ ಅಕ್ಕ ಊಟ ಕಟ್ಟಿಕೊಂಡು ಕೊರ್ಲಕಟ್ಟಾ ಶಾಲೆಗೆ ಬೆಳ್ಳಿಗೆ ಹೋಗಿ ಸಂಜೆ ಬರುತ್ತಿದ್ದರು.   ಕಂಡ್ರಾಜಿ ಶಾಲೆಯ ಪಕ್ಕದಲ್ಲಿಯೇ ನಮ್ಮ ಬಾಡಿಗೆ ಮನೆಯಿತ್ತು. ಮನೆಯಲ್ಲಿ ನಮ್ಮ ಜೊತೆ ನಮ್ಮ ಚಿಕ್ಕಮ್ಮ ಸಹಾ ವಾಸಿಸುತ್ತಿದ್ದರು. ನಮ್ಮ ಮನೆಯ ಪಕ್ಕದಲ್ಲಿಯೇ ತದಡಿ ಗ್ರಾಮದ ಉಷಾ ಟೀಚರ್ ಇದ್ದರು ಅವರು ಸಹಾ ಕಂಡ್ರಾಜಿ ಶಾಲೆಯಲ್ಲಿ ಶಿಕ್ಷಕಿಯಾಗಿದ್ದರು. 80 ದಶಕದಲ್ಲಿ ಇಲ್ಲಿ ಯಾವುದೇ ಆಧುನಿಕತೆಯ ಸುಳಿವಿರಲಿಲ್ಲ. ನಮ್ಮ ಮೂಲತ: ಊರು ಕುಮಟಾ ತಾಲ್ಲೂಕಿನ ಬೆಟ್ಕುಳಿ, ವೇಳೆಗೆ ದೂರವಾಣಿಯ ಸಂಪರ್ಕವೂ ಅಷ್ಟೊಂದು ಇರಲಿಲ್ಲ. ನಮ್ಮ ಊರಿನೊಂದಿಗೆ ಕೇವಲ ಪತ್ರ ವ್ಯವಹಾರ ಮಾತ್ರ ನಡೆಯುತ್ತಿತ್ತು.  ಬೇಸಿಗೆ ರಜೆ, ದಸರಾ ರಜೆಗೆ ನಾವು ಊರಿಗೆ ಬರುವ ರೂಢಿಯಿತ್ತು.
ಅಂದು 1990 ಜುಲೈ ತಿಂಗಳು ಮಲೆನಾಡಿನಲ್ಲಿ ಬಾರಿ ಮಳೆಯಾಗುತ್ತಿತ್ತು.  ತಿಂಗಳಿನ ಒಂದು ರವಿವಾರ ರಾತ್ರಿ ನಾವೆಲ್ಲರೂ ರಾತ್ರಿ 9.30 ಹೊತ್ತಿಗೆ ಊಟವನ್ನು ಮಾಡಿ ಮಲಗಿದ್ದೆವು. ಬಾರಿ ಗಾಳಿ, ಮಳೆ ಜೊತೆಗೆ ಚಳಿಯೂ ಸಹಾ ತುಂಬಾ ಇತ್ತು.  ನಮ್ಮ ಮನೆಯ ಪಕ್ಕದಲ್ಲಿಯೇ ಶಾಲೆ ಇತ್ತು. ಮನೆಯ ಹಿಂಬಾಗದಲ್ಲಿ ದೊಡ್ಡದಾದ ಮರವೊಂದು ಇತ್ತು.  ರಾತ್ರಿ ಸುಮಾರು 1 ಗಂಟೆ ಸುಮಾರಿಗೆ ಭೀಕರ ಗಾಳಿಯಿಂದ ಮನೆಯ ಮೇಲೆ ಏನೋ ಬಿದ್ದ ಹಾಗೇ ಅನಿಸಿತು. ತಕ್ಷಣ ಎಚ್ಚೆತ್ತ ನನ್ನ ಅಪ್ಪ ಮನೆಯ ಎದುರುಗಡೆ ಮರದ ದೊಡ್ಡದಾದ ಕೊಂಬೆಯೊಂದು ಬಿದ್ದಿರುವುದನ್ನು ಕಿಟಕಿಯಿಂದ ನೋಡಿ ತಕ್ಷಣ ನನ್ನ ಮತ್ತು ನನ್ನ ಅಣ್ಣನನ್ನು ಎಬ್ಬಿಸಿ ಮನೆಯ ಮೇಲೆ ಮರ ಬಿದ್ದಿರುವುದು ತಕ್ಷಣ ಶಾಲೆಯ ಬಳಿ ಹೋಗಿರಿ ಎಂದು ಬಾಗಿಲು ತೆರೆದು ಹೊರಗೆ ಓಡಿಸಿದರು. ಮಳೆಯಲ್ಲಿ ನಾನು, ಅಣ್ಣ ತೊಯುತ್ತಾ ಮನೆಯಿಂದ ಹೋರಗೆ ಓಡಬೇಕು ಎನ್ನುವುದರಲ್ಲಿ ಮನೆಯ ಹಿಂಬಾಗದಲ್ಲಿ ಇದ್ದ  ಬೃಹದಾಕಾರದ ಮರ ನೇರವಾಗಿ ಮನೆಯ ಮೇಲೆ ಬಂದೆ ಬಿಟ್ಟಿತ್ತು. ನನ್ನ ಅಣ್ಣ ಹೋಗಿ ಶಾಲೆಯ ಬಳಿ ಸೇರಿದ ನಾನು ಪುನ; ಒಳಗೆ ಬಂದು ತಿರುಗಿ ಓಡಿ ಶಾಲೆಯ ಬಳಿ ಸೇರಿದೆನು. ತಕ್ಷಣ ಅಪ್ಪ ನನ್ನ ಅಕ್ಕ, ಚಿಕ್ಕಮ್ಮ, ಅಮ್ಮ ಎಲ್ಲರನ್ನು ಎಬ್ಬಿಸಿ ಶಾಲೆಯ ಹತ್ತಿರ ಕಳುಹಿಸಿದರು. ಪಕ್ಕದ ಉಷಾ ಟೀಚರ ಸಹಾ ಓಡಿ ಬಂದು ನಾವೆಲ್ಲರೂ ಶಾಲೆಯ ಬಳಿ ಸೇರಿಕೊಂಡೆವು. ಎಲ್ಲರಿಗೂ ಮನೆಯ ಹಂಚಿನ ತುಣುಕು ಬಿದ್ದು ಚಿಕ್ಕ ಪುಟ್ಟ ಗಾಯವಾಗಿತ್ತು. ನಾವೆಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದೆವು.  ರಾತ್ರಿಯಲ್ಲಿ ಗದ್ದೆಗೆ ನೀರು ಬಿಡಲು ಹೋಗಿ ಹಿಂದಿರುತ್ತಾ ಇದ್ದ ಅದೇ ಊರಿನ ಈಶ್ವರ ನಾಯ್ಕರು ಬಂದು ನಮ್ಮನ್ನು ಸಮಧಾನ ಪಡಿಸುತ್ತಿದ್ದರು. ದೇವರು ದೊಡ್ಡವನ್ನು ನಾವೆಲ್ಲ ಬದುಕಿದೆವು. ಹೊಟ್ಟೆಪಾಡಿಗಾಗಿ ಇಲ್ಲಿಗೆ ಬಂದು ನಾವೆಲ್ಲ ಸತ್ತೆ ಹೋಗುತ್ತಿದ್ದೆವು ಎಂದು ಅಪ್ಪ ಅಳುತ್ತಿದ್ದರು. ಅಮ್ಮ ಸುಮ್ಮನೆ ಕುಳಿತ್ತಿದ್ದರು.  ನಿಜವಾಗಿಯೂ ಮನೆಯ ಮೇಲೆ ಬಿದ್ದ ಮರದ ಗಾತ್ರ, ಅದು ಬಿದ್ದ ರೀತಿ ನೋಡಿದರೆ ನಾವು ಬದುಕುವ ಸಾಧ್ಯತೆ ತುಂಬಾ ಕಡಿಮೆ ಇತ್ತು ಎಂದು ಬೆಳ್ಳಿಗೆ ನೋಡಿದಾಗ ಗೊತ್ತಾಗುತ್ತಿತ್ತು.
ಪುಟ್ಟ ಗ್ರಾಮ ಕಂಡ್ರಾಜಿಯಲ್ಲಿ ದಿನ ಯಾರು ಕೆಲಸ ಮಾಡಲಿಲ್ಲ. ಎಲ್ಲರೂ ಮಾಸ್ತರ ಮನೆಯ ಮೇಲೆ ಮರ ಬಿದ್ದಿದೆ ಎಂದು ರೊಟ್ಟಿ, ಪಲ್ಯ ಅದು ಇದು ಎಂದು ಹಲವಾರು ರೀತಿಯ ತಿಂಡಿ, ಊಟದ ವ್ಯವಸ್ಥೆಯನ್ನು ಶಾಲೆಯಲ್ಲಿರುವ ನಮಗೆ ತಂದು ಕೊಡುತ್ತಿದ್ದರು. ಬೆಳ್ಳಿಗೆ ಊರಿನವರು ಎಲ್ಲರು ಬಂದು ಮುಂದೆ ಏನು ಎಂದು ಸುತ್ತಿದ್ದಾಗ ಪಟೇಲ ಅಜ್ಜ ಬಂದು, ಮಾಸ್ತರೆ ಏನು ಯೋಚನೆ ಮಾಡಬೇಡಿ ನನ್ನ ಭತ್ತದ ಕಣಜದ ಮನೆಯಲ್ಲಿ ನೀವು ಉಳಿದುಕೊಳ್ಳುವ ವ್ಯವಸ್ಥೆ ಮಾಡುವೆನು ಎಂದು ಹೇಳಿ ತನ್ನ ಮಗನನ್ನು ಕರೆದು ಕಣಜದ ಮನೆಯನ್ನು ಸ್ವಚ್ಛಗೊಳಿಸಲು ಆದೇಶಿಸಿದರು. ಅದರಂತೆ ಉಷಾ ಟೀಚರಿಗೂ ಅಲ್ಲಿಯೇ ಪಕ್ಕದ ಮನೆಯೊಂದರಲ್ಲಿ ರೂಮಿನ ವ್ಯವಸ್ಥೆ ಆಯಿತು.  ಇಂದಿಗೂ ಘಟನೆಯನ್ನು ನೆನಸಿಕೊಂಡರೆ ಮೈ ಜುಮ್ ಏನುವುದು ಮತ್ತು ಕಂಡ್ರಾಜಿಯ ಗ್ರಾಮಸ್ಥರ ಪ್ರೀತಿ ಕಣ್ಣ ಎದುರಿಗೆ ಬರುವುದು.  ಇಂದು ಕಂಡ್ರಾಜಿ ಗ್ರಾಮ ಆಧುನಿಕ ಹಳ್ಳಿಯಾಗಿದೆ. ಇಂದಿಗೂ ನನ್ನ ಅಮ್ಮ ಅದೇ ಶಾಲೆಯಲ್ಲಿ ಶಿಕ್ಷಕಿ ಇರುವರು. ಘಟನೆಯನ್ನು ನೆನೆಸಿಕೊಂಡಾಗ ಇಂದಿಗೂ  ಕಣ್ಣಂಚಿನಲ್ಲಿ ನೀರು ಬರುವುದು.
                                                                                                                                                                 ವಿವೇಕ ಬೆಟ್ಕುಳಿ

ಬುಧವಾರ, ಜನವರಿ 2, 2013

ಬಾಲ್ಯದ ನೆನpu



 ಯಕ್ಷಪ್ರಶ್ನೆ
ನಾನು 1990  ರಲ್ಲಿ ಶಿರಸಿ ತಾಲ್ಲೂಕು ಕಂಡ್ರಾಜಿ ಗ್ರಾಮದಲ್ಲಿ ನಾಲ್ಕನೇ ತರಗತಿಯಲ್ಲಿ ಓದುತ್ತಿದ್ದೆನು.  ಆರು ಗಂಡು ಮಕ್ಕಳು, ಐದು ಹೆಣ್ಣು ಮಕ್ಕಳು ತರಗತಿಯಲ್ಲಿದ್ದರು.  ಪ್ರತಿ ವರ್ಷ ಅಗಸ್ಟ 15 ಮತ್ತು ಜನವರಿ 26 ಬಂದರೆ ನಮಗೆ ತುಂಬಾ ಸಂತೋಷ.  ದಿನ ಶಾಲೆಯಲ್ಲಿ ಕಡ್ಡಾಯವಾಗಿ ಮನರಂಜನಾ ಕಾರ್ಯಕ್ರಮವಿರುತ್ತಿತ್ತು.  ಅದರಂತೆ 1990 ರಲ್ಲಿ ಆರು ತಿಂಗಳ ಪರೀಕ್ಷೆಯಲ್ಲಿ ಯಾರು ಹೆಚ್ಚು ಅಂಕವನ್ನು ಗಳಿಸುವರೋ ಅದರಂತೆ ನಾಟಕದಲ್ಲಿ ಪಾತ್ರವನ್ನು ನೀಡುವುದಾಗಿ ಘೋಷಣೆಯಾಯಿತು. ಅತಿ ಹೆಚ್ಚು ಮಾತನಾಡುವ ಪಾತ್ರ ಇದ್ದರೆ ಅದು ತುಂಬಾ ಗೌರವಕ್ಕೆ ಪಾತ್ರವಾದ್ದದು ಎಂಬ ಭಾವನೆ ಆಗ ನಮ್ಮಲ್ಲಿ ಇತ್ತು. ಅದನ್ನು ಗಮನಿಸಿಯೇ ಓದಲು ಪ್ರೋತ್ಸಾಹಿಸುವ ಸಲುವಾಗಿ ರೀತಿಯ ಘೋಷಣೆಯನ್ನು ಉಷಾ ಟೀಚರ ಮಾಡಿದ್ದರು. ನಾಟಕವು ಸಹ ನಿಗದಿಯಾಗಿತ್ತು ಅದೇ ಯಕ್ಷಪ್ರಶ್ನೆ  ಅದರಲ್ಲಿ ಆರು ಪಾತ್ರದಾರಿಗಳಿದ್ದರು ನಾವು ಸಹಾ ಆರು ಗಂಡು ಮಕ್ಕಳು ನಾಲ್ಕನೇ ತರಗತಿಯಲ್ಲಿದ್ದೆವು. ಸಾಮಾನ್ಯವಾಗಿ ಓದುವ ವಿಚಾರ ಮತ್ತು ಪರೀಕ್ಷೆಯಲ್ಲಿ ಅಂಕ ಗಳಿಸುವಲ್ಲಿ ನಾನು ಮತ್ತು ನನ್ನ ಆತ್ಮೀಯ ಸ್ನೇಹಿತ ರಾಜೇಂದ್ರ ಇಬ್ಬರೇ ಸ್ಪ¢ðಗಳು.  ಕೈ ಬರಹ ಸುಂದರವಿದ್ದ ಕಾರಣಕ್ಕಾಗಿ ರಾಜೇಂದ್ರನಿಗೆ ಅಂಕ ಹೆಚ್ಚಾಗಿ ಒಮೊಮ್ಮೆ ಬರುತ್ತಿತ್ತು. ಅದರಂತೆ ಆರು ತಿಂಗಳ ಪರೀಕ್ಷೆ ಮುಗಿದು ಫಲಿತಾಂಶ ಬಂತು  ಎಂದಿನಂತೆ  ರಾಜೇಂದ್ರ ಶಾಲೆಯಲ್ಲಿ ಮೊದಲ ಸ್ಥಾನದಲ್ಲಿ ಇದ್ದನು. ನಾನು 2 ನೇ ಸ್ಥಾನದಲ್ಲಿ ಇದ್ದೆನು.  ಮಾಡಿದ ಘೋಷಣೆಯಂತೆ ಯಕ್ಷ ಪ್ರಶ್ನೆ ನಾಟಕದಲ್ಲಿ ಹೆಚ್ಚು ಮಾತಿರುವುದು ಯಕ್ಷನ ಪಾತ್ರದ್ದು ಅದು ರಾಜೇಂದ್ರನ ಪಾಲಾಯಿತು, ಧರ್ಮರಾಯನ ಪಾತ್ರ ನನ್ನದಾಯಿತು. ಅದರಂತೆ ಗಣಪತಿ ಭೀಮ, ಗುರುಮೂ dÄð, ಉಳಿದಂತೆ ದಿನೇಶ ಮತ್ತು ಬಲೀಂದ್ರ ನಕುಲ ಸಹದೇವರಾಗಿ ಆಯ್ಕೆ ಆದೆವು. ನಾಟಕದ ನಿಯಮದಂತೆ  ಕೇವಲ ಪಾಂಡವರು ಮಾತ್ರ ವೇದಿಕೆಯಲ್ಲಿ ಬರಬೇಕಾಗಿತ್ತು. ಯಕ್ಷ ವೇದಿಕೆ ಹಿಂಬಾಗದಲ್ಲಿಯೇ ಇರುವ ಅಗತ್ಯವಿತ್ತು. ಇದನ್ನು ತಿಳಿದು ನನ್ನ ಸ್ನೇಹಿತನಿಗೆ ತುಂಬಾ ದುಖ:ವಾಯಿತು ಆದರೆ ನಿರ್ಧರದಂತೆ ಪಾತ್ರವನ್ನು ನಿರ್ವಹಿಸಲೇ ಬೇಕಾಯಿತು. ನಾಟಕ ಉತ್ತಮವಾಗಿ ಆಯಿತು ಎಲ್ಲವೂ ಸುಗಮವಾಗಿ ನಡೆಯಿತು. ನಮ್ಮ ಇಬ್ಬರ ನಡುವೆ  ¸ÀàÂð 7 ನೇ ತರಗತಿಯವರೆ ನಡೆದು ನಂತರ ಇಬ್ಬರೂ ಬೇರೆ ಬೇರೆ ಶಾಲೆಗೆ ಹೋದೆವು.




ಒಬ್ಬಂಟಿಯಾಗಿ ಬಾಲ್ಯದ ನೆನಪನ್ನು ನೆನಪಿಸಿಕೊಳ್ಳುತ್ತಿರುವಾಗ ಪದೇ ಪದೇ ರಾಜೇಂದ್ರನ ನೆನಪಾಗುವುದು. ಆತ ಇಂದಿಗೂ ಯಕ್ಷನಾಗಿಯೇ ಇರುವುದು ಕಂಡು ಬರುವುದು. ರಾಜೇಂದ್ರನ ಜ್ಞಾನ, ಮಾತನಾಡುವ ಶೈಲಿ, ಬರವಣಿಗೆ, ಏನನಾದರೂ ಸಾಧಿಸುವ ಛಲ, ಕಾಲೇಜಿಗೆ ಹೋಗುವಾಗ ಎಸ್ಎಫ್ಐ ನೊಂದಿಗೆ ತೊಡಗಿಕೊಂಡ ರೀತಿ ಇವೆಲ್ಲವು ಆತ ಏನನಾದರೂ ಮಾಡಬಹುದು ಎಂದು ನನಗೆ ಅನಿಸುತಿತ್ತು. ಆದರೇ ರಾಜೇಂದ್ರ ನಾನು ಎಂದು ಕೊಂಡತೆ ಆಗಲಿಲ್ಲ.  ಅನೇಕ ಕಾರಣಗಳಿಂದ ಆತ ಡಿಎಡ್ ತರಭೇತಿಯನ್ನು ಅರ್ಧಕ್ಕೆ ಬಿಟ್ಟ, ಓದನ್ನು ಮುಂದುವರೆಸಲಿಲ್ಲ. ಯಾವುದೇ ಒಂದು ಕಡೆ ನೆಲೆಯೂ ನಿಲ್ಲಲಿಲ್ಲ ತುಂಬಾ ದಿನದಿಂದ ಸಂಪರ್ಕದಲ್ಲಿಯೂ ಇಲ್ಲ. ಬೆಂಗಳೂರಿನಲ್ಲಿ ಏನೋ ಮಾಡುತ್ತಿರುವನು ಎಂಬುದು ಮಾತ್ರ ತಿಳಿದಿರುವುದು. ಬಾಲ್ಯದ ನೆನಪಾದಾಗ ಇಂದಿಗೂ ನನಗೆ ನಾವು ಮಾಡಿದ ನಾಟಕ ಅದರಂತೆ ರಾಜೇಂದ್ರ ಇಂದಿಗೂ ಯಕ್ಷನಂತೆ ಇರುವುದು ನನಗೆ ಸಾಮ್ಯತೆಯಂತೆ ಕಂಡು ಬರುವುದು. ಹೌದು ಖಂಡಿತ ಆತ ಏನೋ ಒಳ್ಳೆಯ ಕೆಲಸವನ್ನು ಮಾಡುತ್ತಿರುವನ್ನು ಎಂಬ ನಂಬಿಕೆ ನನಗಿದೆ.
                                                                                                                         ವಿವೇಕ ಬೆಟ್ಕುಳಿ


ಸಮಾನತೆಯ ಹೆಸರಿನಲ್ಲಿ ಮಹಿಳೆ ಪುರುಷನಾಗುವುದು ಸೂಕ್ತವೇ?

  ಸ್ವಾತಂತ್ರ್ಯ ಸಿಕ್ಕು 75 ವರ್ಷ ಕಳೆದರೂ ಮಹಿಳೆ ಸಮಾನತೆ ಎಂಬುದು ಬಂದಿಲ್ಲ . ಇಂದಿಗೂ ದೇಶದಲ್ಲಿ ಅರ್ಧದಷ್ಟು ಜನಸಂಖ್ಯೆ ಇದ್ದರೂ ಮಹಿಳಾ ಜನಪ್ರತಿನಿಧಿಗಳ...